ಗೋವರ್ಧನವನ್ನು ಕಂಡು

ಏಕೆ ಗೋವರ್ಧನವೆ ಹೆಬ್ಬಾವಿನಂದದಲಿ
ಮಬ್ಬಾಗಿ ಮಲಗಿರುವೆ ಚಿಂತೆಯಲ್ಲಿ
ಮೈಗೆ ಸರಿಯಿರದೇನು? ಏಕೆ ಬಾಡಿಹೆ ಹೇಳು?
ನೋವು ಮೂಡಿದೆ ನಿನ್ನ ಗೆಲುಮೊಗದಲಿ

ಬಾಲ ಗೋಪಾಲಕರ ಕಳೆಯು ತಪ್ಪಿದುದೆಂದು
ನಿಡುಸುಯ್ದು ಸೊಪ್ಪಾಗಿ ಸೊರಗಿರುವೆಯಾ?
ಗೋಸಲೀಲೆಯಕಾಂಬ ಸೌಭಾಗ್ಯವಿಲ್ಲೆಂದು
ಕಣ್ಮುಚ್ಚಿ ದುಗುಡದಲಿ ಒರಗಿರುವೆಯಾ

ಅಂದು ಮಥುರಾನಗರಕಾನಂದ ತಂದವನು
ಗೋವುಗಳ ವರ್ಧಿಸಿದ ಗೋವರ್ಧನ
ಹಳ್ಳಿ ಗೋಕುಲವಾಗಿ ಸೌಭಾಗ್ಯ ಹೊಂದಿತ್ತು
ಸೊಗವುಣಲು ಬಂದಿದ್ದ ಗೋವರ್ಧನ

ಅವನ ಕೊಳಲಿನ ದನಿಗೆ ನಿನ್ನ ಮೈ ಕಿವಿಯಾಯ್ತು
ಅಂದಿನಾ ಸೌಖ್ಯವನ್ನು ಹೇಳು! ಮೌನ
ಮುರಿದು ! ಗಿಡಮರವೆಲ್ಲ ಹುಚ್ಚೆದ್ದು ಕುಣಿದಾವು
ಕೇಳಿ ನೀಬಣ್ಣಿಸುವ ಆ ವಿತಾನ

ಎದೆಯಾಳದಲಿ ಬಿದ್ದ ಆಸೆ ಒಡಮುರಿದೇಳೆ
ಬಾಳು ನಂದನ ರೂಪತಾಳುವಂತೆ
ಹಸುರಿಸುವುದೊಂದೆ ತಡ ನೋಡು ನಿನ್ನಯ ಮೈ ಯು
ಮಥುರೆಯಾಗುವದಣ್ಣ ಮೊದಲಿನಂತೆ

ಗೋವುಗಳು ನಲಿದಾವು ಬಳ್ಳಿಗಳು ಪುದಿದಾವು
ಕಾನನದ ತುಂಬೆಲ್ಲ ಕಾಯಮಾನ
ನಿನ್ನ ಜಾಡ್ಯವು ಕಳೆಯೆ ಗಿರಿಧರನು ಬಂದಾನು
ನಿನ್ನೆದೆಯು ಉಂಡೀತು ಮುರಳಿಗಾನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೬
Next post ರಾವಣಾಂತರಂಗ – ೧೬

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys